ಮಸ್ತಕ ತಿಂತು ಮನುಷ್ಯನ್ನ

ಪ್ರಿಯ ಸಖಿ,

ಅಡಗಿ ಮನಿ ಅವ್ವನ್ನ ತಿಂತು
ಅಧಿಕಾರ ಅಪ್ಪನ್ನ ತಿಂತು
ಪುಸ್ತಕದ ಹೊರೆ ತಿಂತು ತಮ್ಮನ್ನ
ಮಸ್ತಕ ತಿಂತು ಮನುಷ್ಯನ್ನ

ಶೈಲಜಾ ಉಡಚಣ ಅವರ ಈ ಹನಿಗವನ ಮೇಲ್ನೋಟಕ್ಕೆ ಎಷ್ಟು ತಮಾಷೆಯಾಗಿದೆ ಯಲ್ಲವೇ? ಆದರೆ ಆಳಕ್ಕಿಳಿದಷ್ಟು ಅರ್ಥವಾದಂತೆಲ್ಲಾ ವಿಶೇಷ ಅರ್ಥವನ್ನು ಕೊಡುತ್ತದಲ್ಲವೇ? ಅಡುಗೆ ಮನೆಯೆಂಬ ಕಾರ್ಖಾನೆಯಲ್ಲಿ ಮೂರು ಹೊತ್ತು ಅದರಲ್ಲೇ ಕರಗಿಹೋಗುತ್ತಾರೆ ನಮ್ಮ ಅನೇಕ ಹೆಣ್ಣುಮಕ್ಕಳು. ಹಾಗೇ ಗಂಡು ಅಧಿಕಾರ ಸ್ಥಾನದಲ್ಲಿರುವಾಗ ಅದರ ಗರ್ವ, ಅಹಂಕಾರಗಳಲ್ಲೇ ಮೆರೆಯುತ್ತಾ ತನ್ನತನ ಕಳೆದುಕೊಳ್ಳುತ್ತಾನೆ. ರಾಶಿ ಪುಸ್ತಕದ ಹೊರೆ ಮಗುವಿನ ಕ್ರಿಯಾಶೀಲತೆಯನ್ನೂ, ಸೃಜನಶೀಲತೆಯನ್ನೂ ನುಂಗಿಬಿಡುತ್ತದೆ. ಹಾಗೇ ‘ಮನುಷ್ಯನ್ನ ಅವನ ಮಸ್ತಕವೇ ತಿಂದು ಬಿಡುತ್ತದೆ’ ಎನ್ನುತ್ತಾರೆ ಕವಯಿತ್ರಿ.

ನಿಜವಾದ ಮಾತಲ್ಲವೇ ಸಖಿ. ಇತ್ತೀಚಿನ ದಿನಗಳಲ್ಲಿ ಮನುಷ್ಯ ಭಾವನೆಗಳಿಗಿಂತಾ ಬುದ್ಧಿವಂತಿಕೆಗೆ ಹೆಚ್ಚಿನ ಮಹತ್ವ ನೀಡುತ್ತಿದ್ದಾನೆ. ಹೃದಯದಿಂದ ಅಳೆಯಬೇಕಾದ ಎಷ್ಟೊಂದು ಮೌಲ್ಯಗಳನ್ನು ಮೆದುಳಿನಿಂದ ಅಳೆಯಲು ಹೋಗಿ ಖಾಲಿಯಾಗುತ್ತಿದ್ದಾನೆ. ಇಂದಿನ ನಮ್ಮ ಸಾಮಾಜಿಕ ಜೀವನ ಅಸ್ತವ್ಯಸ್ತಗೊಂಡಿರುವುದಕ್ಕೆ ಅದನ್ನು ಎಂಥದೋ ಮಬ್ಬು ಶೂನ್ಯತೆ ಆಳುತ್ತಿರುವುದಕ್ಕೆ ನಾವು ಭಾವನೆಗಳನ್ನು ನಿಕೃಷ್ಟಗೊಳಿಸಿರುವುದೇ ಕಾರಣ ಆಗಿದೆ. ಚಿಂತಕ ಡಿ. ಹೆಚ್. ಲಾರೆನ್ಸ್ ‘A man who is emotionally educated is like a phoenix’  ಭಾವನಾತ್ಮಕವಾಗಿ ಕಲಿತ ಮನುಷ್ಯ ಫೀನಿಕ್ಸ್ ಪಕ್ಷಿಯಂತೆಯೇ ತನ್ನದೇ ಬೂದಿಯಿಂದ ಮತ್ತೆ ಎದ್ದು ಹೊಸ ಜೀವನವನ್ನು ಆರಂಭಿಸಬಹುದು ಎನ್ನುತ್ತಾನೆ. ಬರಿಯ ಬುದ್ಧಿಯನ್ನು ಉಪಯೋಗಿಸಲು ಕಲಿತ ಮನುಷ್ಯ ಬಹಳ ಬೇಗನೆ ಹೊಸತನವನ್ನು ಕಳೆದುಕೊಂಡು ಕಳೆದುಹೋಗುತ್ತಾನೆ.

ಸಖಿ, ಅದಕ್ಕೆಂದೇ ಮನುಷ್ಯನನ್ನು ಭಾವನಾತ್ಮಕವಾಗಿ ತಯಾರಿಸುವುದೇ ಇಂದಿನ ಅವಶ್ಯಕತೆ ಮತ್ತು ತುರ್ತು. ಹಾಗಾದಾಗ ಮನುಷ್ಯ ತನ್ನ ಸೃಜನಶೀಲತೆಯನ್ನು ಹೆಚ್ಚು ಹೆಚ್ಚು ಬಳಸಿಕೊಂಡು ಹೃದಯ ಶ್ರೀಮಂತಿಕೆಯ ಔನ್ನತ್ಯವನ್ನು ಸಾಧಿಸಲು ಸಾಧ್ಯವಾಗುತ್ತದೆ. ಅದಿಲ್ಲದಿದ್ದಾಗ ಮಸ್ತಕವೇ ಮನುಷ್ಯನನ್ನು ತಿಂದು ಅವನನ್ನು ನಿರ್ವೀರ್ಯನನ್ನಾಗಿಸಿ ಬಿಡುತ್ತದೆ. ಅಲ್ಲವೇ ಸಖಿ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

ಚಿತ್ರ: ಪ್ರಮೋದ್ ಪಿ ಟಿ Previous post ಗಣೇಶ ಬಂದ
Next post ನನ್ನ ಜೀವನ ನದಿಯ ಎದೆ ಮೊರೆತ

ಸಣ್ಣ ಕತೆ

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

cheap jordans|wholesale air max|wholesale jordans|wholesale jewelry|wholesale jerseys